Slide
Slide
Slide
previous arrow
next arrow

ಮತಾಂತರಗೊಂಡ ಗಿರಿಜನರನ್ನು ಮೀಸಲಾತಿಯಿಂದ ಹೊರಗಿಡಲು ಆಗ್ರಹಿಸಿ ಸಮಾವೇಶ

300x250 AD

ಶಿರಸಿ: ಹಿಂದೂ ಧರ್ಮದಿಂದ ಅನ್ಯ ಮತಕ್ಕೆ ಮತಾಂತರಗೊಂಡ ಗಿರಿಜನರನ್ನು ಪರಿಶಿಷ್ಟ ಪಂಗಡದಿಂದ ಕೈಬಿಡಲು ಒತ್ತಾಯಿಸಿ ಗಿರಿಜನ ಸುರಕ್ಷಾ ವೇದಿಕೆ ವತಿಯಿಂದ ನ.26ರಂದು ಮೈಸೂರಿನಲ್ಲಿ ಗಿರಿಜನ ಸಂಸ್ಕೃತಿ ಸಂರಕ್ಷಣಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.

ಅವರು ಶಿರಸಿಯ ಜಿಲ್ಲಾ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಮತಾಂತರಗೊಂಡವರಿಗೆ ಈ ಮೀಸಲಾತಿ ಹಾಗೂ ಇನ್ನಿತರ ಪರಿಶಿಷ್ಟ ಪಂಗಡಕ್ಕೆ ನೀಡುವ ಸವಲತ್ತುಗಳನ್ನು ನೀಡಬಾರದು. ದೇಶದಲ್ಲಿ 700ಕ್ಕೂ ಹೆಚ್ಚು ಗಿರಿಜನ ಪಂಗಡಗಳ ಅಭಿವೃದ್ಧಿ ಮತ್ತು ಉನ್ನತೀಕರಣದ ಸಲುವಾಗಿ ರಾಜ್ಯಾಂಗವು ಮೀಸಲಾತಿ ಮತ್ತು ಇತರ ಸರ್ಕಾರದ ಸೌಲಭ್ಯಗಳನ್ನು ಹೊಂದುವ ಅವಕಾಶ ನೀಡಿದೆ. ಸರ್ಕಾರ ಈ ಸೌಲಭ್ಯಗಳನ್ನು ಗಿರಿಜನರು ಸಂಸ್ಕೃತಿ, ಸಂಪ್ರದಾಯಗಳು, ಅವರ ನಂಬಿಕೆ ವಿಶ್ವಾಸಗಳನ್ನು ಉಳಿಸಿಕೊಳ್ಳಲು ಮತ್ತು ಅಭಿವೃದ್ಧಿಗೆಂದು ನೀಡಿದೆ. ಆದರೆ ಕೆಲ ಗಿರಿಜನರು ಅವರ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬಿಟ್ಟು ಇತರ ಧರ್ಮಕ್ಕೆ ಪರಿವರ್ತನೆಗೊಂಡು ಪರಿಶಿಷ್ಟ ಪಂಗಡಕ್ಕೆ ಸಿಗುತ್ತಿರುವ ಮೀಸಲಿಟ್ಟ ಸರ್ಕಾರಿ ಸೌಲಭ್ಯಗಳನ್ನು ಮತ್ತು ಇನ್ನಿತರ ಸವಲತ್ತುಗಳನ್ನೂ ಸಹ ಪಡೆಯುತ್ತಿದ್ದಾರೆ.

300x250 AD

ಮತಾಂತರ ಗೊಂಡವರು ನಿಜವಾದ ಮೂಲ ಗಿರಿಜನರಿಗೆ ಸೇರಲ್ಪಡುವ ಹಕ್ಕು ಸೌಕರ್ಯಗಳನ್ನು ಶೇ.80ರಷ್ಟು ಉಪಯೋಗಿಸಿಕೊಳ್ಳುತ್ತಿದ್ದು, ನಿಜವಾದ ಗಿರಿಜನರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಿಜವಾದ ಗಿರಿಜನರಿಗೆ ಆಗುತ್ತಿರುವ ಈ ನಷ್ಟವನ್ನು ಗಿರಿಜನರಿಗೆ ತಿಳಿಸುತ್ತಾ, ಮತಾಂತರರಾದ ಪರಿಶಿಷ್ಟ ಪಂಗಡದ ಗಿರಿಜನರಿಗೆ ಈ ಸವಲತ್ತು ನೀಡಬಾರದು ಎಂಬ ಧ್ವನಿ ಸರ್ಕಾರಕ್ಕೆ ತಲುಪಿಸುವುದಕ್ಕಾಗಿ ಗಿರಿಜನ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದರು.
ಉಚ್ಛ ನ್ಯಾಯಾಲಯದ ಸಮಿತಿ ಅಧ್ಯಕ್ಷ ಮುಜಾಫರ್ ಅಸಾದಿ ವದಿಯ 32 ಅಂಶಗಳನ್ನು ಜಾರಿಗೆ ತರುವುದು. ಬುಡಕಟ್ಟು ಅರಣ್ಯ ಹಕ್ಕು 2006 ಜಾರಿಗೆ ತರುವುದು. ಸಂವಿಧಾನದ ಐದನೆಯ ಅನುಸೂಚಿತ ಮತ್ತು ಫೇಸ್ ಕಯ್ದೆ 1996 ರ ಘೋಷಣೆ ಮಾಡುವುದು. ಪ್ರಾಚೀನ ಬುಡಕಟ್ಟು ಘೋಷಣೆಗೆ ಶಿಫಾರಸ್ಸು ಮಾಡುವುದು. ಪರಿಶಿಷ್ಟ ಪಂಗಡವಲ್ಲದ ಕೆಲವು ಜಾತಿಗಳಿಗೆ ಎಸ್‌ಟಿ ಪ್ರಮಾಣಪತ್ರ ವಿತರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಹಕ್ಕೊತ್ತಾಯ ಮಾಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆ ಪ್ರಮುಖರಾದ ರಾಮಚಂದ್ರ ಮರಾಠೆ, ಬಾಬು ಪಾಟೀಲ, ಶಂಕರ ರಂಗಜ್ಜನವರ್ ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top